Total Pageviews

Monday, August 31, 2015

ಮಾನವೀಯತೆಗೆ ನಿಕಟವಾಗಿದ್ದವರನ್ನು ಕೊಂದವರ ಧರ್ಮ ಅದೆಂಥಹ ಕಪಟ:

ಮಾನವೀಯತೆಗೆ ನಿಕಟವಾಗಿದ್ದವರನ್ನು ಕೊಂದವರ ಧರ್ಮ ಅದೆಂಥಹ ಕಪಟ:
-ಡಾ. ಅಭಿನಂದನ ಬಳ್ಳಾರಿ .
ಧರ್ಮವೆಂಬುದು ಮಾನವನ ವರ್ತನೆಯನ್ನು ಬದಲಿಸಿ ಆತನನ್ನು ಶುದ್ಧನನ್ನಾಗಿ ಮಾಡಬೇಕು . ಅದಾಗದಿದ್ದರೆ , ಮಾನವನನ್ನು ವೈರಾಗ್ಯವೆಂಬ ಮಾಯೆಗಾದರೂ ಕರೆದೊಯ್ಯಬೇಕು , ಇಲ್ಲವೊ ಹಾಳಾಗಿ ಹೋಗಲಿ ದೇವಸ್ಥಾನಗಳನ್ನು ಸೃಷ್ಟಿಸಿ ದುಡ್ಡು ದುಡಿಯುವ ಕೇಂದ್ರವನ್ನು ಸ್ಥಾಪಿಸಿ ಸಾಯಲಿ . ಆದರೇ , ಮಾನವೀಯ ಮೌಲ್ಯಗಳನ್ನು ಕಿತ್ತಿ , ಮನುಷ್ಯನಲ್ಲಿ ಭಾವುಕತೆಯೆ ಇಲ್ಲದಂತಾಗಿ ಮಾಡಿ ಕ್ರೌರ್ಯವನ್ನು ಉತ್ಪಾದಿಸುವ ವಸ್ತುವಾಗಬಾರದು .
...
ಬಸವಣ್ಣ ಮಾನವನ ಜೀವನ ಶೈಲಿಯನ್ನು ಉನ್ನತಗೊಳಿಸುವುದಕೆಂದೆ ವಚನಾದಿಗಳನ್ನು ರಚಿಸಿದ . ಗುಟ್ಟಾಗಿದ್ದ ಅದೆಷ್ಟೋ ರಟ್ಟುಗಳನ್ನು ಬಿಚ್ಚಿಡೂವಲ್ಲಿ ಆತನ ವಚನಗಳು ಸಾರ್ಥಕವಾದವು . ಮಾನವನನ್ನು ಅನೇಕ ಶೃಂಖಲೆಗಳಿಂದ ಬಿಡಿಸಲು ನೆರವಾದವು ವಚನಗಳು . ಇಂತಹ ವಚನಗಳನ್ನು ಅಧ್ಯಯಿಸಿ , ಸಂಶೋಧನೆಯಿಂದ ಸತ್ಯವನ್ನು ಅನ್ವೇಶಿಸುವ ಪ್ರತಿಜ್ಞೆಯನ್ನು ಮಾಡಿದ್ದ ಸಾಹಿತಿ ಡಾ. ಎಂ ಎಂ ಕಲಬುರ್ಗಿಯವರನ್ನು ಬರ್ಬರವಾಗಿ ಕೊಂದವರ ಧರ್ಮ ಮತ್ತು ಅದರ ತತ್ವಗಳು ಎಂಥಹವಿರಬೇಕು ? ಮಂಗಳಾರತಿ ಮಾಡುವಾಗ ಬಾರಿಸುವ ದೊಡ್ಡ ದೊಡ್ಡ ಘಂಟೆ, ಜಾಗಟೆಗಳಿಂದ ಈ ಧರ್ಮಾಂಧರನ್ನು ಶಿಕ್ಷಿಸಬೇಕೆ? ಅಥವಾ ಈ ಧರ್ಮವೆಂಬ ಹೆಣ್ಣಿನೊಂದಿಗೆ ಸದಾ ಮಲಗಿ ಆಕೆಯನ್ನು ಗರ್ಭಧರಿಸುವಂತೆ ಮಾಡಿ ಉಪ-ಧರ್ಮದ ಕುಡಿ,ಕಿಡಿಗಳನ್ನು ಹುಟ್ಟುಹಾಕಲು ನೆರವಾದ ಮಠಾಧಿಶರಿಗೂ , ಧರ್ಮಕ್ಕೊಂದು ಸೇನೆಯನ್ನು ಸೃಷ್ಟಿಸಿ ಕಾಯುತ್ತಿರುವ ಧರ್ಮದ ಭಂಟರಿಗೋ ಅವರು ಮಾಡುತ್ತಿರುವ ನೀಚ ಕೃತ್ಯತೋರಿಸಿ ಅವಮಾನಿಸಬೇಕೋ?
ಸಂಶೋಧನೆ ಮಾಡಲು ಬೇಕಾದ ಧ್ಯಾನ , ಧಾರಣ , ಸ್ಮರಣ , ಮನನ , ಅಧ್ಯಯನ , ಅನುಷ್ಠಾನ , ಸಿದ್ಧಿ ಹಂತಗಳನೆಲ್ಲ ತಮ್ಮಲ್ಲಿ ರೂಢಿಸಿಕೊಂಡು ಸಾಮಾಜಿಕ ಕೊಡುಗೆಯಾದಂತಹ ವಚನ ಸಾಹಿತ್ಯವನ್ನು ಪ್ರಸರಿಸುವ ಕಾರ್ಯ ಕೈಗೊಂಡವರನ್ನು ಕೊಲ್ಲು ಎಂದಿತೇ "ಪಂಚೇಂದ್ರಿಯವನ್ನು ಪಾಂಚಾಲಿಗೆ ಮಿಸಲಿಡು " ಎನ್ನುವ ಧರ್ಮ? ಮೆಲಿರೋರು ಮೇಲೆ , ಕೆಳಗಿರೋದು ಕೆಳಗೆ ಉಳಿಯೋ ಹಾಗೆ ಕೆಲಸ ಮಾಡುತ್ತಿರುವ ಧರ್ಮಗಳು ,ಸೃಷ್ಟಿಸುತ್ತಿರುವ ತಲ್ಲಣಗಳು , ಹುಟ್ಟುಹಾಕುತ್ತಿರುವ ಭೀತಿ-ಭ್ರಾಂತಿ, ಮೂಡಿಸುತ್ತಿರುವ ಸಂಕಟವೆಂಬ ಸಂಕೋಲೆಯಿಂದ ಹೊರಬರಲು ಸಾಧ್ಯವೇ? ಎನ್ನುವಂಥಹ ಪರಿಸ್ಥಿತಿ ಬಂದೊದಗಿದೆ .
ಹಿಂದೂ ಧರ್ಮದಲ್ಲಿನ ಅವೈಚಾರಿಕತೆ ವಾಸ್ತವವನ್ನು ಅಲ್ಲಗಳೆಯುತ್ತದೆ . ವಾಸ್ತವವನ್ನು ವಚನಗಳ ಮೂಲಕ ಅರ್ಥೈಸಿಕೊಳ್ಳಬಹುದು ಎಂದು ಪ್ರತಿಪಾದಿಸುತ್ತಿದ್ದ ; ಪರಿಸರವನ್ನು ಮಥಿಸಬಲ್ಲ ಕಡಗೋಲು ಒರಟಾಗಿರಬೇಕು ಎಂದು ತಮ್ಮನ್ನು ತಾವೇ ಎಲ್ಲ ರೀತಿಯ ಪ್ರತಿರೋಧಗಳಿಗೆ ಹೆದರದ ಜೀವಿಯನ್ನಾಗಿ ಮಾಡಿಕೊಂಡಿದ್ದ ಹಿರಿಯ ಜೀವ ಡಾ.ಎಂ.ಎಂ.ಕಲಬುರ್ಗಿಯನ್ನು ಕೊಂದದ್ದು ಯಾವುದೇ ಪಿಸ್ತೂಲಿನ ಗುಂಡುಗಳಲ್ಲ. ಹೊರತಾಗಿ ಅಸಮಾನತೆ, ಕ್ರೌರ್ಯ , ಮುಂತಾದ ತಾಮಸ ಪ್ರವೃತ್ತಿಯನ್ನು ಹುಟ್ಟಿಹಾಕುತ್ತಿರುವ ಪೂಜೆಯ ಮಂತ್ರಗಳು , ಜಾಗಟೆಯ ಶಬ್ಧ ಮತ್ತು ದುರ್ಗುಣ ಸಂಬೋಧಿಸುವ ’ಅಧರ್ಮ’ ಗ್ರಂಥ ಮಾನವನಿಗೆ ಅನವಶ್ಯಕವಾಗಿರುವ ಅಸೂಯೆ , ಲೋಭ , ರೋಷಗಳನ್ನು ಒಳಗೊಂಡು ಮತ್ತೊಂದು ಚರಿತ್ರೆ ಬರೆಸಲು ಹೊರಟಿದೆ. ಈ ಚರಿತ್ರೆಗೆ ಮೂಲವಾಗಿರುವುದು ಆ ಹಿಂದೂ ಧರ್ಮದ ದುರ್ಮಾರ್ಗ ಪ್ರೇರೆಪಿಸುವ ದುರ್ದರ್ಮಗ್ರಂಥ . ಎಂಗೆಲ್ಸ್ ಹೇಳಿದಂತೆ ಚರಿತ್ರೆ ಮುಂದುವರೆಯಲು ಕಾರಣವೇ "Evil passions of men " . ಇಂತಹ ಧರ್ಮದ ಸ್ವಭಾವ ಹುಡುಕಹೊರಟಿರುವ ಸಂಭ್ರಮದ ಅಗತ್ಯತೆಯನ್ನು ಕೊನೆಗಾಣಿಸಬೇಕು . ’ ಕಳಬೇಡ , ಕೊಲಬೇಡ ’ ಎನ್ನುವ ಮಾತನ್ನು ಹೇಳದ ಧರ್ಮಗ್ರಂಥಗಳನ್ನು ಅದರ ಮೂಲಕೃತಿಯೂ ಸಿಗದಂತೆ ಸುಟ್ಟುಹಾಕಬೇಕು . ಬ್ರಾಹ್ಮಣನಾದವ ಹೊಲೆಯರಾದವಳೊಂದಿಗೆ ಸಂಭೋಗಿಸಿ , ಹೊಲೆಯನಾದವ ಬ್ರಾಹ್ಮಣನಾದವಳು ಸ್ವಾಧಿಸಿ ಧರ್ಮವನ್ನು ಪುನರ್ ರಚಿಸಬೇಕು . ಬ್ರಾಹ್ಮಣ್ಯವನ್ನು ಬೇರು ಸಮೇತ ಕಿತ್ತು ಸಮಾಜದಲ್ಲಿನ ತಲ್ಲಣಾದಿಗಳನ್ನು ದೂರ ಮಾಡಬೇಕು . ಬ್ರಾಹ್ಮಣ್ಯದ ಪಿಸ್ತೂಲನ್ನು ಹಿಡಿದು ವಿಚಾರವಾದಿಗಳ ಕೊಂದವರ ಬೆರಳಚ್ಚನ್ನು ಕಂಡುಹಿಡಿಯುವುದು ಕಷ್ಟ . ಏಕೆಂದರೆ ಈಗ ಬ್ರಾಹ್ಮಣ್ಯದ ಪಿಸ್ತೂಲನ್ನು ಕೇವಲ ಬ್ರಾಹ್ಮಣರಷ್ಟೆ ಹಿಡಿದಿಲ್ಲ , ಅದನ್ನು ಏಲ್ಲ ವರ್ಗದವರು ಸಂಘಟನೆಯೊಂದರ ಮುಖೇನ ಹಿಡಿದಿದ್ದಾರೆ . ಆ ಸಂಘಟನೆಯನ್ನು ನಾಶಪಡಿಸುವಂತಾಗಲೆ ನಮ್ಮೆಲ್ಲಾ ವಿಚಾರವಾದಿಗಳು ಶಾಂತಿಯ ಮೂಲಕವಾದರೂ ಅಥವಾ ಕ್ರಾಂತಿಯ ಮೂಲಕವಾದರೂ.

No comments:

Post a Comment