Total Pageviews

Wednesday, December 31, 2014


ಕಲ್ಪನೆ:
ಡಾ.ಪ್ರೊ.ಅಭಿನಂದನ ಬಳ್ಳಾರಿ

ಮನಸಿನ ಕಲ್ಪನೆ
ಆಸೆಯ ಪ್ರಕ್ಷೇಪಣೆ
ಈಗಿರುವಂತೆಯೆ ಇರಲಾರದು
ಬಯಸುವಂತಾಗಲಾರದು
ಆದರ್ಶವಾಗುವ ಇಚ್ಛೆಯಲ್ಲಿ
ಸಂಘರ್ಷವಿದೆ ಆಯ್ಕೆಯಲ್ಲಿ
ಹೋಲಿಕೆ ಮತ್ತು ಖಂಡನೆಯಿಂದ
ರಚಿತವು ಈ ಕಲ್ಪನೆಯು
ಕುಪಿತವಾಗಿಹುದು ಅದರ ಬಣ್ಣನೆಯು
ಆಗಬೇಕಾದರೆ ಕಲ್ಪನೆಯ ರೂಪಾಂತರ
ತೊಲಗಬೇಕು ಮನಸ್ಸುಗಳ ನಡುವಿನ ಅಂತರ

Friday, December 26, 2014

ಅಸಹಾಯಕ:
-ಡಾ.ಪ್ರೊ.ಅಭಿನಂದನ ಬಳ್ಳಾರಿ

ಸೂರಿಲ್ಲದ ಆ ಮನೆಯಲಿ ಬೆಳೆದ ಹುಡುಗ ನಾ
ಅಡಿಕೆಮರವು ಕಾಣುತಿತ್ತು ಆಗಸವು ಮರೆಯಾಗಿತ್ತು
ಭಯವು ಮನಸಿನಲ್ಲಿ ಆರಂಭವಾಯಿತು
ಕತ್ತಲಲ್ಲಿ ಸೂರ್ಯನ ಬೆಳಕು ಮರೆಯಾಯಿತು
ಅಸ್ತಿತ್ವವನ್ನೆ ಮರೆಸಿತ್ತು ಆ ಪರಿಸರ
ಮರಗಳನ್ನು ಸರಿಸಲು ಇರಲಿಲ್ಲ ಯಾವ ಪರಿಕರ
ಅಸಹಾಯಕ ನಾನು  ಈ ಸಮಾಜದಿ ಇಲ್ಲ ನನಗೆ ಯಾವ  ಬಲವು
ಸಹಾಯಕ್ಕಾಗಿ ಯಾರು ಬಾರರು ಅಂತಹದು ನನ್ನ ಕುಲವು !!!!
ತಿಮ್ಮಜ್ಜ:
-ಪ್ರೊ.ಡಾ.ಅಭಿನಂದನ ಬಳ್ಳಾರಿ

ಊರ ಮಂದಿ ಗೋಳ ಕೇಳ್ತಾನ ಈ ಅಜ್ಜ
ಇವನ ಹೆಸರು ತಿಮ್ಮಜ್ಜ
ಕುಡಿದು ಕೂಡ್ತಾನ ಮುಂಜಾನೆದ್ದು
ಬರ್ತಾನೆ ಊರಕಟ್ಟಿಗೆ ಎದ್ದು ಬಿದ್ದು

ಚುಟ್ಟ ಬೇಕು ಸೇದಲಿಕ್ಕ
ಹುಡುಗಿ ಬೇಕು ನೋಡಲಿಕ್ಕ
ತನಗಾರ ಆಗೋದಿಲ್ಲ ನಡ್ಯಾಕ
ಹಾಡು ಬೇಕಂತಾನ ಕುಣ್ಯಾದಕ

ವನಿತೆರ ಮಾತಿಗೆ ಕಿವಿಗೊಡ್ತಾನ
ಪುಕ್ಕಟ್ಟೆ ಸಲಹೆ ಇವ ಕೊಡ್ತಾನ
ಇವನ ಮಕ್ಳು ಇವ್ನ ನೋಡ್ಕೊಳ್ಳಾಂಗಿಲ್ಲ
ಊರಿನ ಉಸಾಬರಿ ಇವ ಬಿಡಾಂಗಿಲ್ಲ 
ಗರ್ವ:
ಡಾ.ಪ್ರೊ.ಅಭಿನಂದನ ಬಳ್ಳಾರಿ

ಆ ತೀರದಿ ಎನೋ ಇದೆಯೆಂದು
ಉದ್ರೇಕದಿ ಈಜುತಿಹೆ ನೀನು
ಈ ತೀರವೆ ಆ ತೀರವಾಗಿಹುದು
ಹಾಗಾದರೆ ನೀ ಈ ತೀರದಿಂದ ದೂರ ಸಾಗುತ್ತಿದ್ದಿ
ಮರ್ಮವ ಅರಿ ಸಂಕಟ ಅಲ್ಲಿಯೂ ಇದೆ
ಗರ್ವವ ಬಿಡು ಸುಖವು ಇಲ್ಲಿಯೂ ಇದೆ!!!

ಕಾರ್ಪೋರೇಟ್
-ಡಾ.ಪ್ರೊ.ಅಭಿನಂದನ ಬಳ್ಳಾರಿ

ಬೆಂಗಳೂರಲ್ಲಿ ಯಾಕಿಷ್ಟು ಬಾಡಿಗೆ ರೇಟ್
ಯಾಕಂದ್ರೆ ಇಲ್ಲಿದೆ ಕಾರ್ಪೋರೇಟ್
ಸಮಾಜದ ಬಗ್ಗೆ ಕಳಕಳಿ ಇಲ್ಲ
ಪಕ್ಕದ್ಮನೆಲಿ ಎನಾದ್ರು ಇವರಿಗೆ ಚಿಂತೆಯಿಲ್ಲ
ತಂದೆ ತಾಯಿಗಳಿಗೆ ಇಲ್ಲ ಮಾನ್ಯತೆ
ಟೆಕ್ ಪಾರ್ಕಗಳಲ್ಲಿ ಅಡಗಿದೆ ಇವರ ಕಥೆ
ವ್ಯವಸಾಯ ಗೊತ್ತಿಲ್ಲ
ಆಲೋಚನೆಗೆ ತಲೆಯೂ ಹಚ್ಚಿಲ್ಲ
ವಾರಾತ್ಯಂದಲ್ಲಿ ಪಿವಿಆರ್ ಐನಾಕ್ಸು
ತಿಂಗಳಾದರು ಒದೆಯದೆ ನಾರುತ್ತೆ ಇವರ ಸಾಕ್ಸು
ಮೈತುಂಬಾ ಹಾಕ್ತಾರೆ ಘಮಘಮಿಸೋ ಸೆಂಟು
ಯಾರ ನಕ್ರು ನಗದೆ ಹಾಕಿರ್ತಾರೆ ಮುಖ ಘಂಟು!!!!
ನಕ್ಷತ್ರ ಕವನ :
-ಡಾ. ಅಭಿನಂದನ ಬಳ್ಳಾರಿ 

ನೋಡಿದಂತೆಲ್ಲಾ ಹೆಚ್ಚುತಿದೆ ನಕ್ಷತ್ರ ಆಗಸದಿ
ಎಣಿಸ ಬಯಸಿದ ಬೆರಳು ಹೆಚ್ಚಬೇಕಿದೆ
ಕೆಲವು ನಕ್ಷತ್ರಗಳು ಶ್ರವ್ಯ , ಹಲವು ಅಲ್ಲ
ಶ್ರವ್ಯವಾದವು ಬೇಗ ಕೇಳಿಸುತ್ತವೆ , ಅಲ್ಲವಾದವು ಸಮಯ ಕೇಳುತ್ತವೆ .
ಪ್ರತಿಯೊಂದಕ್ಕು ಧ್ವನಿಯುಂಟು ,ಬೆಳಕುಂಟು
ಗಾಳಿಯಲಿ ಕೇಳಲಾಗದೆ , ಬಣ್ಣದ ಮರದ ಕೊಂಬೆಯ ನಡುವೆ ಅಡಗಿದೆ
ನಾನು ಕಾಣುತ್ತೇನೆ ಇವರೆಲ್ಲರ ರೆಪ್ಪೆಗಳಲ್ಲಿದ್ದೇನೆ ಎನ್ನುತಾ
ಗಾಳಿ ಬಿಸುತಿರೆ , ಮರದ ರೆಂಬೆ ತೆರೆಯುತಿರೆ
ಕಣ್ಣು ತಂಪಾಗುತಲಿ .
ಕಂಡಿತು -ಕೇಳಿತು ನಕ್ಷತ್ರ ಕವನ
ಸ್ವಯಂಕೃತ!!!
-ಅಭಿನಂದನ ಬಳ್ಳಾರಿ 

ಮೋಹವಿರದೆ ಇದ್ದರೆ ಬಾದುಕಿನಲಿ
ಸಂಗಾತಿಯ ವ್ಯಾಮೋಹವಿರದಿರೆ ,
ನೂರೊಂದು ಹಾದಿ ಸಾಗುತ್ತಿದ್ದೆ ,
ಘೋರವಾಗುತ್ತಿದ್ದೆ ಅಪಾತ್ರರಿಗೆ
ಧೈರ್ಯವಿಲ್ಲದೆ ಎಕಾಂತದಲಿ ಬಾಳಲು
ಆಸೆಯಬಿಟ್ಟು ನಿರಾಸಿಯ ಹಾದಿ ಹಿಡಿದೆ
ಸಾಗರದ ಅಲೆಗೆ ಅಂತ್ಯವುಂಟು ಗಮ್ಯವಿಲ್ಲ
ನನ್ನಯ ಹಾದಿಗೆ ಅಂತ್ಯವೂ ಇಲ್ಲ ಗಮ್ಯವು ಇಲ್ಲ
ಭ್ರಮೆಯ ಆಸರೆಪಡೆದ ಜೀವನಕ್ಕೆ ಬೆಲೆಯಿಲ್ಲ
ಮಂಜಿನಪರದೆ ಸ್ಥಿರವಲ್ಲ
ಪರರಹಿತ ಬಯಸು ಕಳವಳವಿಲ್ಲ !!!!!

Thursday, December 25, 2014

ಮನಸ್ಸಿನ ಮುದ:
-ಡಾ.ಪ್ರೊ.ಅಭಿನಂದನ ಬಳ್ಳಾರಿ

ಬಯಕೆಯು ಸದಾ ನಿನ್ನತ್ತ
ಮಾಧುರ್ಯದಿ ಸದಾ ಸೆಳೆಯುವಿ ನಿನ್ನ ರಾಗ-ತಾಳಗಳಿಂದ
ನಕ್ಷತ್ರಗಳೆ ತುಂಬಿರುವ ರಾತ್ರಿಯಲಿ ನೀ ಹಂಬಲ ಮೂಡಿಸುವೆ
ಘೋರ ಗೊಂದಲಗಳಿಲ್ಲದೆ ಮನವ ಮುದವೀಯುವೆ
ಮನದಲಿ ಆವರಿಸಿಕೊಂಡ ಕತ್ತಲೆಯನು ಮರೆಸುತ್ತ
ಚಳಿಯಿಂದ ಬೆದರಿದ ಕನಸುಗಳ ಬೆಚ್ಚಗಾಗಿಸುವೆ
ಕರ್ಣದ ಕಣಿವೆಯನು ತಂಪಾಗಿಸಿ
ಮನವ ಹಿಗ್ಗಿಸಿ ನಲಿದಾಡಿಸುವೆ
ಸರಿಗಮಗಳ ಪದಗಳಲ್ಲೆ ನೀ ಮಾತಾಡುವೆ!!!!

Wednesday, December 24, 2014

ಬದುಕು ನೀ ವಿರಚಿತ
-ಡಾ.ಫ್ರೊ.ಅಭಿನಂದನ ಬಳ್ಳಾರಿ

ನಾ ಮೊದಲ ಹೆಜ್ಜೆ ಇಟ್ಟಾಗಲೂ ನೀನಿದ್ದೆ
ನೆಲದಲಿ ಅಲ್ಲಾಡುತ್ತ ನಡೆವಾಗ
ನೆರಳಿಲ್ಲದೆ ನೀ ನರಳಿದೆ
ನಿನ್ನ ಪ್ರೀತಿಯ ಸೂರಿನಲ್ಲಿ ನಾ ಅರಳಿದೆ
ನಿನ್ನ ಕಣ್ಣಿನ ಪ್ರೀತಿಯ ನೋಟ
ಮರೆಸಿತು ಜಗದ ಎಲ್ಲ ಜಂಜಾಟ
ನಾನು ಕೆಳಗುರುಳಿ ಕೇವಲನೆಂದು ಭಾವಿಸಿದಾಗ
ನಿನ್ನ ಕರುಣೆಯ ಬೆಳಕು ದಾರಿತೋರಿಸಿತಾಗ
ನೀನು ಆರೋಹಿಸಿದೆ ನನ್ನ ಈ ಮಟ್ಟಕ್ಕೆ
ಚಿರಋಣಿ ತಾಯಿ ಸದಾ ನಿನಗೆ ನೀ ಪಟ್ಟ ಕಷ್ಟಕ್ಕೆ
ನೀ ಕೊಟ್ಟದ್ದು ಪ್ರೋತ್ಸಾಹ , ಮಾರ್ಗದರ್ಶನ
ವಾತ್ಸಲ್ಯ ಕಾಳಜಿಗಳಿಗೆ , ನೀನೆ ನಿದರ್ಶನ
ಹುಟ್ಟಿದಾಗ ಎಲ್ಲ ಮಾರ್ಗಗಳಾಗಿದ್ದವೂ ಅಪರಿಚಿತ
ತಿಳಿದು ಸಫಲವಾಗಿಹೆನು ಈ ಬದುಕು ನೀ ವಿರಚಿತ

Saturday, December 20, 2014

ಬದುಕ ಬಲಾತ್ಕರಿಸದಿರಿ.
-ಡಾ.ಪ್ರೊ.ಅಭಿನಂದನ ಬಳ್ಳಾರಿ
ಸಿರಿವಂತರು ನೀವು ಜಾತಿಯಲ್ಲಿ
ಹಣ, ಬಂಗಲೆ , ಸಂತಸಗಳಲ್ಲಿ 
ನಾವು ಬಡ ಕೆಳಜಾತಿಯವರು ಜಗದ ರೀತಿಯಲ್ಲಿ
ದುಖ:ದುಮ್ಮಾನವಿಹುದು ಪ್ರತಿನಿಮಿಷದಲ್ಲಿ
ಕಾಣುವುದೆಲ್ಲ ನಿನ್ನ ತಳಮಳವು ಸೃಜನಶೀಲ
ನಮ್ಮ ಸಂಕಟ ನೋವೆಲ್ಲವು ಹಿಂಸಾತ್ಮಕ
ನೀವು ಬಸ್ಸಿನ ಗಾಜನ್ನು ಒಡೆಯಬಹುದು
ಟಿಕೆಟ್ ರಹಿತ ಪ್ರಯಾಣಿಸಲುಬಹುದು
ನಿಮ್ಮ ಜೀಬೆನು ಖಾಲಿಯಿಲ್ಲ ,
ಪ್ರಾಯೋಗಿಕ ಪ್ರತಿಭಟನೆಗೆ ಮಿತಿಯಿಲ್ಲ
ಸುಂದರ ರಸ್ತೆಗಳೆಲ್ಲವೂ ನಿಮ್ಮದು
ನಾವು ಬೆವರುಭರಿತ ಗಬ್ಬು ರೋಡ್ ರೋಲರ್ ಗಳು,
ನೀವು ಧರಿಸುವ ಬೂಟಿನ ಚರ್ಮ ನಮ್ಮದು ,
ಪಾಲಿಶ್ ಮಾಡುವ ರಕ್ತ ಕೂಡ
ನಿಮ್ಮ ಕೊಳೆಯನ್ನು ನಿರ್ಮಲಗೊಳಿಸಿದ್ದೇವೆ
ಕೊಠಡಿಯನ್ನು ತೊಳೆದು ಹೊಳೆಯುವಂತೆ ಮಾಡಿದ್ದೇವೆ ,
ನಾವು ಬರಿದಾಗಿದ್ದೇವೆ ರಿಕ್ಷಾ ಎಳೆದು , ಕೂಲಿ ಮಾಡಿ
ಹಾಲಿಲ್ಲದ ತಾಯಂತಾಗಿದ್ದೇವೆ ಹಸಿದ ಮಗುವಿಗೆ
ನಮಗೆ ಜನನವಿಲ್ಲ , ಮರಣವಿಲ್ಲ ಜನಗಣತಿಯಲ್ಲಿ
ಬಲಾತ್ಕರಿಸಬೇಡಿ ದಯಮಾಡಿ ನಾವಿದ್ದೇವೆ ಸಿರಿವಂತರು ಮಾನ-ಮರ್ಯಾದೆಯಲ್ಲಿ
ಪ್ರಕ್ಷುಬ್ಧ:(ಎಚ್ಚರಿಕೆ ಪತ್ರಿಕೆಯಲ್ಲಿ ಪ್ರಕಟಗೊಂಡ ಕವಿತೆ)
-ಡಾ.ಪ್ರೊ.ಅಭಿನಂದನ ಬಳ್ಳಾರಿ , ಚಿಂತಕರು , ಸಾಹಿತಿಗಳು , ಬೆಂಗಳೂರು 
ಆ ದಿನವು ನೆನಪಾಯಿತು 
ಪ್ರಸ್ತುತದಲ್ಲಿ ಭರವಸೆಯನ್ನು ರಚಿಸಿತು ಭಯದ ಜೊತೆ 
ಯಾವುದನ್ನು ಆಯ್ಕೆಮಾಡುವುದು ಎಂಬ ಜಿಜ್ಞಾಸೆ
ಭಯವು ನಿಯಂತ್ರಿಸುತ, ಭರವಸೆಯು ಷರತ್ತನ್ನು ವಿಧಿಸುತ
 ನನ್ನ ವರ್ತಮಾನವನ್ನು ಪ್ರಕ್ಷುಬ್ಧವಾಗಿಸಿವೆ
ನನ್ನ ಕಿವಿಯಲ್ಲಿ ವಟಗುಟ್ಟುತಿವೆ ಆ ಪುರಾಣಪಠಣಗಳು , 
ಆಲಿಸಲಾಗುತ್ತಿಲ್ಲ ಬಡದಲಿತರ ರೋದನ ,ಆವರಿಸಿದೆ ಎಲ್ಲೆಲ್ಲೂ ದೇವಸ್ಥಾನಗಳು , 
ಮರೆಯಾಗಿದ್ದಾನೆ  ಸಲಹಬೇಕಿರುವ ದೇವರು ,
ಬೇಕೆ ನಮ್ಮ ಮನುಕುಲಕೆ ಈ ಸ್ಪರ್ಧಾತ್ಮಕ ಧರ್ಮಗಳು ,
ಕಡ್ಡಾಯತನದಿಂದ ಕಟ್ಟಿಹಾಕುವ ಮೂಢವಿಚಾರಗಳು  ,
ನಿರ್ವಿಧೇಯ ಧರ್ಮಗಳು ಸದಾ ಸ್ಮರಿಸುವಂತಹವು 
ಸಂಘರ್ಷ , ಪಂಥಿಯತೆ , ಅಸಹಿಷ್ಣುತೆಯ ಕೊಡುಗೆ ಕೊಟ್ಟವು 
ವೇಗದಲ್ಲಿ ವಿವೇಕವ ಕಿತ್ತಿ , ಹಿಂಸಿಸುವ ಜಾತೀಯತೆ ಬಿತ್ತಿ
ಬರಡುಮಾಡುತ್ತಿವೆ ಬದುಕ , ಆರಿಸಲು ಪ್ರಯತ್ನಿಸುತಿವೆ ಮನೆಮನದ ಬೆಳಕ
ಬನ್ನಿ ಧಿಕ್ಕರಿಸುತ ಈ ಸರ್ವಾಧಿಕಾರದ ಸಂಸ್ಥಾನ ,
ಆಹ್ವಾನಿಸುತ ಗೌರವಿಸೋಣ ಭಾರತದ ಸಂವಿಧಾನ.

Thursday, December 4, 2014

ಮೈಸೂರಿನ ಹೇಡಿ ಮತ್ತು ನೀಯತ್ತಿಲ್ಲದ ಅನಾಗರೀಕ ದೀವಾನ್ ಪೂರ್ಣಯ್ಯ:ಡಾ. ಅಭಿನಂದನ ಬಳ್ಳಾರಿ


ಹೈದರಾಲಿಯ ಮನಸ್ಸು ಗೆದ್ದು ಆತನ ಆಸ್ಥಾನದಲ್ಲಿ ಕಿರಿಯ ಲೆಕ್ಕಿಗನ ಸ್ಥಾನ ಗಿಟ್ಟಿಸಿದ ಅವನ ಹೆಸರು ಪೂರ್ಣಯ್ಯ. ಮಾಧ್ವ ಬ್ರಾಹ್ಮಣನಾಗಿದ್ದ ಪೂರ್ಣಯ್ಯ ತುಪ್ಪ ತಿಂದು ತಿಂದು ತನ್ನ ಬುದ್ಧಿಯನ್ನು ಮಿತಿ ಮೀರಿ ಚುರುಕುಗೊಳಿಸಿಕೊಂಡಿದ್ದ. ಹೈದರ್ ಗೆ ಆಗೊಮ್ಮೆ ಅತೀ ಸಂಕಷ್ಟದ ಸಂಧರ್ಭ ಎದುರಾದಾಗ ಅಂಥಹ ಪರಿಸ್ಥಿತಿಯಿಂದ ಹೈದರತಪ್ಪಿಸಿಕೊಳ್ಳಲು ಸಹಾಯಮಾಡುವ ಮೂಲಕ ಪೂರ್ಣಯ್ಯ ಹೈದರ್ ನ ವಿಶ್ವಾಸ ಗೆದ್ದು ಆತನ ತೋಶಿಖಾನೆಯ ಮುಖ್ಯಸ್ಥನಾಗುತ್ತಾನೆ. ಹೈದರ್ ದರ್ಬಾರ್ ನ ಕೆಲವೇ ಕೆಲವು ಗಣ್ಯರಲ್ಲಿ ಪ್ರಮುಖನಾಗುತ್ತಾ , ಆತನ ಆಸ್ಥಾನದಲ್ಲಿ ದೊಡ್ಡ ಸ್ಥಾನ ಗಿಟ್ಟಿಸಿಕೊಳ್ಳುತ್ತಾನೆ . ಆನಂತರ ಹೈದರ್ ಸತ್ತಾಗ ಆತನ ಶವವನ್ನು ಗುಟ್ಟಾಗಿ ಹೂತು ಮೈಸೂರು ಆಸ್ಥಾನವನ್ನು ಉಳಿಸಿದನು ಎಂಬ ಕೀರ್ತಿಯಡೆಯಲ್ಲಿಯೇ ಟಿಪ್ಪು ಸುಲ್ತಾನ್ ರಿಗೂ ಆಪ್ತನಾಗುತ್ತ ಆತನ ರಾಜಮಂತ್ರಿಯಾಗುತ್ತಾನೆ ಜನಿವಾರದ ಈ ಪೂರ್ಣಯ್ಯ. ಟಿಪ್ಪು ಆಸ್ಥಾನದ ಎಲ್ಲ ಗುಟ್ಟುಗಳು ಬಲ್ಲವರಲ್ಲಿ ಪೂರ್ಣಯ್ಯ ಅಗ್ರಜ. ಟಿಪ್ಪುವಿನೊಂದಿಗೆ ಸ್ನೇಹದಿಂದಲೇ ವರ್ತಿಸುತ್ತಾ ಹೆಸರುಗಳಿಸುತ್ತಾನೆ. ಕೆಲವು ಪರಂಗಿ ಇತಿಹಾಸಕಾರರು ಪೂರ್ಣಯ್ಯನನ್ನು ಮೈಸೂರ್ ಆಸ್ಥಾನದ ಪೂರ್ಣಚಂದ್ರ ಎಂದು ಬರೆದಿದ್ದಾರೆ. ಕೆಲವರು ಟಿಪ್ಪು ನಿಜಸ್ವರೂಪವನ್ನು ತಾವು ಕಾಣದಿದ್ದರು ಪೂರ್ಣಯ್ಯನ ಸ್ವರೂಪವನ್ನು ಕಂಡವರಂತೆ ಗೀಚಿದ್ದಾರೆ. ಈ ಪೂರ್ಣಯ್ಯ ಎಂಥಹ ನೀಚನೆಂದರೆ ತನ್ನ ಮಗಳನ್ನೆ ಟಿಪ್ಪುವಿನ ಬಳಿ ಕಳುಹಿಸಿ ಆತನನ್ನು ಮೋಹಿಸುವಂತೆ ಹೇಳುತ್ತಾನೆ. ಟಿಪ್ಪು ಯಾವಗ ಮೋಹಕ್ಕೆ ಬೀಳುವುದಿಲ್ಲ ಎಂದು ತಿಳಿಯುತ್ತದೆಯೋ ಆಗ ತಾನು ಮನೆಯಲ್ಲಿಲ್ಲದ ಸಮಯದಲ್ಲಿ ಟಿಪ್ಪು ತನ್ನ ಮನೆಗೆ ಬಂದು ತನ್ನ ಸೌಂದರ್ಯವತಿ ಮಗಳನ್ನು ಕೆಡಿಸಿದ್ದಾನೆ ಎಂದು ತನ್ನ ಎಲುಬಿಲ್ಲದ ನಾಯಿಯಿಂದ ಊರೆಲ್ಲ ಬೊಗಳುತ್ತಾನೆ ನೀಯತ್ತಿಲ್ಲದ ನಾಯಿ ಪೂರ್ಣಯ್ಯ. ಮತ್ತೊಂದು ಕಡೆ ಟಿಪ್ಪು ತನ್ನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರವಾಗು ಎಂದು ಒತ್ತಾಯಿಸುತ್ತಿದ್ದಾನೆ ಎಂದು ಸಾರುತ್ತಾನೆ. ಈತನ ಮಾತನ್ನು ಟಿಪ್ಪುವಿನ ಎಲ್ಲ ಹಿಂದೂ ಹಿತೈಷಿಗಳು ನಂಬಿಬಿಡುತ್ತಾರೆ. ಹೀಗೆ ಟಿಪ್ಪುವನ್ನು ಹಿಂದೂವಿರೋಧಿ ಎಂದು ಬಿಂಬಿಸಿದವ ಪೂರ್ಣಯ್ಯ. ನಮಗೆ ಇತಿಹಾಸ ಓದಿದರೆ ತಿಳಿಯುತ್ತೆ ಟಿಪ್ಪು ಎಷ್ಟು ಧರ್ಮ ಸಹಿಷ್ಣುವಾಗಿದ್ದ ಮತ್ತು ಶೃಂಗೇರಿ ಮಠವನ್ನು ಮರಾಠಿಗರಿಂದ ರಕ್ಶ್ಃಇಸಿದ್ದು ಕೂಡ ಇದೇ ಟಿಪ್ಪು ಎಂದು . ಅಲ್ಲದೆ , ನಂಜನಗೂಡೀನ ನಂಜುಂಡೇಶ್ವರ ದೇವಾಲಯದಲ್ಲಿ "ಹಕೀಂ ನಂಜುಂಡ" ಎನ್ನುವ ಲಿಂಗವನ್ನು ನಿರ್ಮಿಸಿದ್ದು ಇದೇ ಟಿಪ್ಪು . ಸೋಜಿಗ ಸಂಗತಿ ಎಂದರೆ ಟಿಪ್ಪ ಆಸ್ಥಾನದ ಕಂದಾಯಮಂತ್ರಿ , ಮತ್ತು ಸೇನಾ ದಂಡನಾಯಕರಾಗಿದ್ದ ಕೃಷ್ಣರಾವ್ ಮತ್ತು ಶ್ರೀನಿವಾಸರಾವ್ ಇವರೆಲ್ಲ ಬ್ರಾಹ್ಮಣ ಹಿಂದೂಗಳೆ ಆಗಿದ್ದರು . ಟಿಪ್ಪು ಪಟ್ಟಬದ್ಧ ಪುರೋಹಿತಶಾಹಿ ಶಕ್ತಿಗಳಿಂದ ಜಮೀನನ್ನು ಕಸಿದು ಬಡವರಿಗೆ ನೀಡಿದ್ದು , ಮತ್ತು ಟಿಪ್ಪು ನರಬಲಿಯಂಥಹ ಮೂಢನಂಬಿಗೆಗಳನ್ನು ವಿರೋಧಿಸಿದ್ದು ಪೂರ್ಣಯ್ಯನಿಗೆ ಅರಗಿಸಿಕೊಳ್ಳಲಾಗದ ತುತ್ತಾಗಿ ಪರಿಣಮಿಸಿತು . ತನ್ನ ಹಿಂದುತ್ವವಾದಿ ಕೋಮುವಾದಿ ಪ್ರಚೋದನೆಗೆ ಒಳಗಾಗಿ ಟಿಪ್ಪು ಆಸ್ಥಾನ ಬಿಟ್ಟು ಬ್ರಿಟೀಷರ ಬಳಿಬಂದ ಪೂರ್ಣಯ್ಯ ಟಿಪ್ಪುವಿನ ಆಸ್ಥಾನವನ್ನು ಪ್ರವೇಶಿಸುವ ಕಳ್ಳಗಿಂಡಿಯನ್ನು ಮತ್ತು ಆತನ ಸೇನಾ ರಹಸ್ಯವನ್ನು ಎಲ್ಲವನ್ನು ಬ್ರಿಟೀಷರಿಗೆ ಹೇಳಿಬಿಡುತ್ತಾನೆ . ತನ್ನನ್ನು ಸಲಹಿದ , ಅನ್ನ-ಆಶ್ರಯ ಕೊಟ್ಟ ದೇವರಾದ ಟೀಪ್ಪುವನ್ನು ವಿನಾಶದಂಚಿಗೆ ತಂದ ಅಪಕೀರ್ತಿ ಇದೇ ಪೂರ್ಣಯ್ಯನಿಗೆ ಸಲ್ಲುತ್ತದೆ . ಕರ್ನಲ್ ವೆಲೆಸ್ಲಿ ಟಿಪ್ಪುವನ್ನು ಕೊಂದುಹಾಕುವಾಗ ಪೂರ್ಣಯ್ಯ ಗಹಗಹಿಸಿ ನಗುತ್ತಿದ್ದ . ಮುಂದೇ ಇದೇ ಪೂರ್ಣಯ್ಯ ಬ್ರ್‍ಇಟಿಷರು ಶರಣಾಗುತ್ತೀರಾ ಎಂದು ಕೇಳಿದಾಗ " ಅಯ್ಯೋ ದೇವರೆ ನೀವು ನಮ್ಮನು ಕಾಶಿ ಮತ್ತು ರಾಮೇಶ್ವರವನ್ನು ಕಾಯುತ್ತಿರುವವರು , ಖಂಡಿತ ಶರಣಾಗುತ್ತೇನೆ ಎಂದು ನುಡಿತ ಹೇಡಿ ಈ ಪೂರ್ಣಯ್ಯ. ಇಂತಹ ದೇಶದ್ರೋಹಿ ಪೂರ್ಣಯ್ಯನನ್ನು ಇತಿಹಾಸಕಾರರು ಬಿಂಬಿಸಿದ ರೀತಿ ಬಹಳ ಶೋಚನೀಯ . ನಮ್ಮ ಗೊಡ್ಡು ಇತಿಹಾಸಕಾರರು ಬ್ರಿಟೀಷರನ್ನು ನಾಡಿನಿಂದ ಒಡಿಸಲು ರಹಸ್ಯ ರೇಷ್ಮೆ ಪತ್ರ ಬರೆದು ಕಾರ್ಯಾಚರಣೆಮಾಡಿದ ಮೌಲ್ವಿಗಳನ್ನು ಶ್ಲಾಘಿಸುವುದಿಲ್ಲ ಬದಲಾಗಿ ತನ್ನ ಪವಿತ್ರ ಜನಿವಾರದಿಂದ ಆಶ್ರಯ ಕೊಟ್ಟ ದಣಿಯನ್ನೆ ನೇಣುಬಿಗಿದ ಪೂರ್ಣಯ್ಯನಂಥವನನ್ನು ಶ್ಲಾಗಿಸುತ್ತಾರೆ . ಪೂರ್ಣಯ್ಯ ನಮಗೆಲ್ಲ ನೀಚತನಕ್ಕೆ , ರಾಜದ್ರೋಹ ಪದಕ್ಕೆ ಪರ್ಯಾಯ ಪದವಾಗಲಿ.