Total Pageviews

Sunday, January 4, 2015

24. ಭೋಜನ:

ಆಲೂಗಡ್ಡೆ ಬೊಂಡಾದ ಜೊತೆ 
ಎಣ್ಣೆ ಬದನೆಕಾಯಿ 

ಶಾವಿಗೆ ಖೀರು 
ಅನ್ನ ತಿಳಿ ಸಾರು 

ಇಡ್ಲಿ ಸಾಂಬಾರ್ 
ಒಂದನೇ ನಂಬರ್
ಪೂರಿ ಚಪಾತಿ 
ಲೋಕಕೆ ಖ್ಯಾತಿ 

ಉಪಿಟ್ಟು ಸಿರ 
ಜೊತೆಗಿಷ್ಟು ಖಾರ
ಗೋಲಿ ಜಿಲೇಬಿ 
ಬಾಯಿ ಗುಲಾಬಿ 

ಚಿರೋಟಿ ಹೋಳಿಗೆ 
ಹೋದರೆ ಹೊಟ್ಟೆಯೊಳಗೆ 
ಮಿಡಿ ಉಪ್ಪಿನಕಾಯಿ 
ತಿನ್ನದವನೆ ನಾಯಿ 


ಬಿಸಿ ಬಿಸಿ ಪಾಯ್ಸ
ಜೋತೆಲ್ಲಿಷ್ಟು ಹಾಸ್ಯ
ಫಿಳ್ಟರ್ರು ಕಾಫಿ 
ಕುಡಿಯದವನೆ ಪಾಪಿ  

ವ್ಯಸನ:
ವ್ಯಸನಕ್ಕೆ  ವ್ಯಾಕುಲನಾದೆನಯ್ಯ
ಕೆಲಸ ಮುಗಿಸಿ ಬಂದ ಮೇಲೆ
ಅಂಟು ತೆಗೆದು ಮೂಸಿ ನೋಡಿ
ಮನದ ಚಿಂತೆ ಮರೆತೆನಯ್ಯ 

ಒದಿನ ಗೀಳು ಬಿಡಿಸಿ 
ದುಡಿವ ಗೀಳು ಹಿಡಿಸಿದ ಮನಕೆ 
ಸಂತಸ ತರುವ ನಿನಗೆ ನಾನು ವ್ಯಾಕುಲನಾದೆನಯ್ಯ

ಕುಡಿದು ಬಂಡು ಹಡೆದಾಕೆಗೆ ಹೊಡೆದ 
ಅಪ್ಪನ ಕ್ರೌರ್ಯವನ್ನು ಮರೆಯಲು 
ನೆಮ್ಮದಿ ತರುವ ನಿನಗೆ ನಾನು ವ್ಯಾಕುಲನಾದೆನಯ್ಯ

ಬದುಕ ಕಿತ್ತ ಭ್ರಮೆಯ ರಚಿಸುವ
ನಿನ್ನಹ ಸುಖದ ಊಹೆಗೆ 
ವ್ಯಾಕುಲನಾದೆನಯ್ಯ , ವ್ಯಾಕುಲತೆ ಬೇಡಯ್ಯ!!!!!


ದ್ಯಾಮವ್ವ :
-ಡಾ.ಅಭಿನಂದನ ಬಳ್ಳಾರಿ
ದ್ಯಾಮವ್ವ ನಿನಗ ಹರಕಿ ಹೊತ್ತು
ಬೆಟ್ಟ ಸುತ್ತು ಬಂದೇವ
ಮನ್ಯಾಗ ಮಕ್ಕಳಿಗ ಉಸಾರು ಇಲ್ಲ
ತಿನ್ನಾಕ ಗಂಜಿಯು ಇಲ್ಲ
ಸಾಯಕತ್ತೀವ ಊರಾಗ ಮಳಿಯಾಗ್ದ
ನಿನ್ನ ಕರುಣ್ಯಾ ಕೇಳಲು ಬಂದೇವ ತಾಯಿ ,
ನೀ ನಮ್ಮನ್ನ ಕಾಯಿ ಅಂತ ಬಂದಾರ ಆಕೆಯ ದಲಿತ ಭಕುತರು
ದ್ಯಾಮವ್ವ ಗುಡಿಯಾಗ ಬೆಚ್ಚಗ ಕುಂತಾಳ
ಬ್ರಾಹ್ಮಣರ ಪೂಜೆಯಲಿ ತಲ್ಲೀನಳಾಗ್ಯಾಳ
ದ್ಯಾಮವ್ವ ಬರ್ತಾಳ ಹೊರಗ ಇರಿ ಅಂದಾರ
ನಿಮ್ಮನ್ನ ಆಕೀನ ಬಂದು ಮಾತಾಡಿಸ್ತಾಳ
ಕಾದಾರು ಕಾದಾರು ಕಲ್ಲಾಗಿ ಬರಲಿಲ್ಲ ದ್ಯಾಮವ್ವ
ಬಂದಾಳೂ ಬ್ರಾಹ್ಮಣನ ಮೈಮ್ಯಾಲೆ
ಸಂವೇದನೆ ಅರಿಯದ ದ್ಯಾಮವ್ವ ನುಡಿದಾಳು
ಬ್ರಾಹ್ಮಣರ ಆಳಾಗಿ ಎಂದಾಳು
ಆಳಾಗಿ ಎಂದಾಳು ಹಾಳಾಗಿ ಎಂದಾಳು
ತನ್ನವತಾರ ಕಳಚಿ ಬಿದ್ದಾಳು !!!!
ಕನ್ನಡದ ಬಾಲ್ಯ
ಡಾ.ಅಭಿನಂದನ ಬಳ್ಳಾರಿ

ಸಂಗ್ಯಾ ಬಾಳ್ಯಾ ಎನ್ನಿರಯ್ಯ
ಸಾಕು ನಮಗೆ ಹಮ್ಟಿ ಡಮ್ಟಿ
ನಮ್ಮ ಮಕ್ಕಳು ಆಡಬಾರದೇನು
ನಲಿಯಬಾರದೇನು , ಕುಣಿಯಬಾರದೇನು ?
ಚಿನ್ನಿ ದಾಂಡು ಹೆಂಗ ಆಡ್ತಾರೆ ಗೊತ್ತಾ?
ಆಗಸಕ್ಕೆ ಗುರಿ ಇಡ್ತಾರೆ ಗೊತ್ತಾ?
ಬಾಲ್ಯಕ್ಯಾಕೆ ಬೇಕು ಆಂಗ್ಲದ ಪ್ರಾಸ
ಇರಲಿ ಕನ್ನಡ ಪ್ರೀತಿ ಬೆರೆತ ರಸ 
ಹೋಲಿಕೆ :
ಡಾ.ಅಭಿನಂದನ ಬಳ್ಳಾರಿ
ಹೋಲಿಕೆ ಬರೀ ಹೋಲಿಕೆ
ಆತ ಸುಂದರನೆಂಬ
ಆಕೆ ಬುದ್ಧಿವಂತಳೆಂಬ
ಅಂಕದಲೂ , ಆಟದಲೂ , ಕಡೆಗೆ ಸಂಬಳದಲೂ
ಹೋಲಿಕೆಯಿಂದಲಿ ಅಸಾಧ್ಯ ವಿಕಸನ
ಪೂರ್ಣತೆ ಕಳೆದು ಕೊಳ್ಳುವುದು ಜೀವನ

ನೆಮ್ಮದಿ:
ಡಾ.ಅಭಿನಂದನ ಬಳ್ಳಾರಿ

ಕುತಂತ್ರದ ಸಂಕೀರ್ಣತೆಗೆ
ಚಟದ ತೃಪ್ತಿಕರತೆಗೆ
ಮೋಸದ ಆತ್ಮವಂಚನೆಗೆ
ಭಯದ ಹತೋಟಿಗೆ
ತೀರ್ಮಾನದ ಗುಪ್ತತೆಗೆ
ಭಾಂಧವ್ಯದ ತಿಳುವಳಿಕೆಗೆ
ಕೊನೆಗೆ ಸ್ವಯಂ ತನ್ಮಯತೆಗೂ ಸಿಕ್ಕಲಿಲ್ಲ
ಅದೇ ನೆಮ್ಮದಿ

ಅಸ್ತಿತ್ವ
ಡಾ.ಅಭಿನಂದನ ಬಳ್ಳಾರಿ
ಆಸಕ್ತಿಯ ಅನುಕ್ರಮದ ಅಲೆಗಳಿಂದ
ಬಣ್ಣನೆಯ ಬಳಲಿಕೆಗಳಿಂದ 
ಬೇಸರದ ಸ್ವಾಧೀನದಿಂದ
ಬೇಡದ ಕುತೂಹಲಗಳಿಂದ
ಅನುಭವಿಸಲಾಗದ ಅಸಹನೆಯಿಂದ
ಕೂಡಿ ಸ್ಥಾಪಿತವಾಗಿಹುದು
ನನ್ನ ಅಸ್ತಿತ್ವ !!!!

Saturday, January 3, 2015

ವಿಧೇಯ:
-ಡಾ.ಅಭಿನಂದನ ಬಳ್ಳಾರಿ

ಅನುಭವದ  ಅನಿವಾರ್ಯ ದೇಹಕೆ
ಮನಸಿಗಿಲ್ಲ ಹೊರೆ
ಯಾವ ಸಂಚಿತದ ಬೇಡಿಕೆಗಳಿಂದಲೂ
ಮಗ್ಧವಾಗಿರುವುದು ಮನಸ್ಸು ಅನುಭವದ ಕಟ್ಟುಪಾಡಿಲ್ಲದೆ
ಇಲ್ಲದಿರೆ ಅದು ಎಚ್ಚರವಾಗಿರಲಾರದು
ಅನುಭವ ತಿಳಿಯಲು ಬೇಕು ವಿಧಾನ
ವಿಧಾನವಿಲ್ಲದಿರೇ ಮಾತ್ರ  ವಿಧೇಯ ಈ ಮನ 
ಪ್ರಭಾವ:
-ಡಾ.ಅಭಿನಂದನ ಬಳ್ಳಾರಿ

ಪ್ರಭಾವಿತನಾಗಬೇಡ
ಒಂದು ಪುಸ್ತಕಕೆ , ಒಬ್ಬ ಶಿಕ್ಷಕಗೆ ,ಒಂದು ಚಿಂತನೆಗೆ
ನೀ ಬಯಸಿದ ಚಿಂತನೆಯಲಿ ಜೀವನ ಸಾಗುತಿರಲಿ
ಆದರ್ಶಗಳು ಮನಸನು ಮೈದಾನವಾಗಿಸಿ
ಯುದ್ಧವನ್ನು ಮಾಡುತಲಿರೆ
ಆಕಾರಗಳು , ರೂಪಗಳು , ಅಭ್ಯಾಸಗಳು
ನಿಯಂತ್ರಿಸುತಲಿರೆ
ಅಸಂಬದ್ಧತೆಯಲಿ ಮೂಡುತ ಅಸ್ಪಷ್ಟತೆ
ಗೊಂದಲದ ಗೂಡಾಗುತ ಜೀವನ ಬಾಡುತ !!!

ನೈತಿಕತೆ:
ಡಾ.ಅಭಿನಂದನ ಬಳ್ಳಾರಿ
ಅಪ್ಪಿಕೊಂಡ ನೈತಿಕತೆ ಎಷ್ಟು ದಿನ ಇದ್ದೀತು
ಸದಾ ದ್ವೇಷ ಅಸೂಯೆ ಹಣದಹಂಬಲದಿಂದ ಕೊಳೆತವ ನೀನು
ಈಗ ಮರ್ಯಾದೆ  ಸ್ಥಾಪನೆಗೆ , ನಿನ್ನ ಲಾಭದಾಯಕ ಗುರಿಗಳಿಗೆ ನೈತಿಕತೆಯ ಸ್ವೀಕರಿಸೊ ನಾಟಕವಾಡುವೇಯಾ?
ಸ್ವೀಕರಿಸು.....
ನಿನ್ನ ನೈತಿಕತೆಯನ್ನು ನಮ್ಮ ತುಟಿಗಳು ಗೌರವಿಸಬಹುದು
ಹೃದಯವಲ್ಲ!!!
ಭಾವನೆ:
ಡಾ.ಅಭಿನಂದನ ಬಳ್ಳಾರಿ
ಭಾವನೆಯನು ಪ್ರೀತಿ ಎಂದು ಭಾವಿಸಿ ಅಪ್ಪಿಕೊಂಡೆ
ಅನೀರಿಕ್ಷೀತವಾಗಿ ಬಲುಬೇಗನೆ ಕಂಪನಕ್ಕೆ ಒಳಗಾದೆ
ಚಿಂತನೆಯು ಶುರುವಾಯಿತು
ಮನಸ್ಸು ಯೋಚಿಸತೊಡಗಿತು
ಭ್ರಮೆಯೋ ಅಲಂಕಾರಿಕವೋ ಈ ಭಾವನೆಯು
ಎನಾದರಾಗಿರಲಿ ಮನಘಾಸಿಮಾಡಿತ್ತು ಅದರ ಚಲನೆಯು !!!!

Friday, January 2, 2015

ಏಕಾಂತ:
-ಡಾ.ಪ್ರೊ.ಅಭಿನಂದನ ಬಳ್ಳಾರಿ

ಏಕಾಂತದಲಿ ನಂಬಿಕೆ ಇಡಲು ಭಯ
ತಣ್ಣನೆ ಗಾಳಿಯ ತಾಜಾತನದಿ
ಹೊಳೆವುದು ನೂರೊಂದು ನೂತನ ವಿಚಾರ
ದೇವರ ಇರುವಿಕೆ ಕಾಡುತಲಿ
ಸ್ವಂತ ಶಬ್ಧ ಮರೆಯಾಗುತಲಿ
ಅಹ್ವಾನಿಸುತ್ತದೆ ರಹಸ್ಯಗಳು
ಹಿಮ್ಮೆಟ್ಟುತ್ತದೆ ತಿಳಿವ ಬಯಕೆಗಳು
ಜ್ಞಾನವಾಗುತ್ತ ಏಕಾಂತದ ಸ್ವಾಧೀನ
ಅಜ್ಞಾತವಾಗಿದ್ದರೇ ಜೀವನವೇ ಪತನ!!!
ಬರವಿದ್ಯಾಕಯ್ಯ:
ಡಾ.ಅಭಿನಂದನ ಬಳ್ಳಾರಿ
ಬರವಿದ್ಯಾಕಯ್ಯ ಹುಟ್ಟಿಗೆ
ವಾತ್ಸಲ್ಯದಿ ತಾಯಾದಾಕಿಗೆ
ಮಮತೆಯ ತಂಗಿಯಾದಾಕಿಗೆ
ಮನೆಯನು ಬೆಳಗುವ ಮಡದಿಯಾದಾಕಿಗೆ

ಶಿಕ್ಷಣದಲ್ಲಿ ರಾಜಿಯಾದವಳು ನಾ
ಸಮಾನತೆಯಲ್ಲಿ ಹರಾಜು ಆದವಳು
ಆಹಾರವಿಲ್ಲದೆ ಒಣಗಿ ಕುಸಿದವಳು
ಕೆಲಸಕಾರ್ಯಗಳಲ್ಲಿ ನಿನ್ನ ಮೀರಿಸಿದವಳು

ನೀ ಕೊಂದರೆ ಅದು ನನಗೆ ಸಾವೇ ಅಲ್ಲ
ಹಿಂಸಾತ್ಮಕ ಬದುಕೆನಗೆ ಸಾವಿಗಿಂತ ಭಿನ್ನವಲ್ಲ!!!