Total Pageviews

Saturday, December 20, 2014

ಪ್ರಕ್ಷುಬ್ಧ:(ಎಚ್ಚರಿಕೆ ಪತ್ರಿಕೆಯಲ್ಲಿ ಪ್ರಕಟಗೊಂಡ ಕವಿತೆ)
-ಡಾ.ಪ್ರೊ.ಅಭಿನಂದನ ಬಳ್ಳಾರಿ , ಚಿಂತಕರು , ಸಾಹಿತಿಗಳು , ಬೆಂಗಳೂರು 
ಆ ದಿನವು ನೆನಪಾಯಿತು 
ಪ್ರಸ್ತುತದಲ್ಲಿ ಭರವಸೆಯನ್ನು ರಚಿಸಿತು ಭಯದ ಜೊತೆ 
ಯಾವುದನ್ನು ಆಯ್ಕೆಮಾಡುವುದು ಎಂಬ ಜಿಜ್ಞಾಸೆ
ಭಯವು ನಿಯಂತ್ರಿಸುತ, ಭರವಸೆಯು ಷರತ್ತನ್ನು ವಿಧಿಸುತ
 ನನ್ನ ವರ್ತಮಾನವನ್ನು ಪ್ರಕ್ಷುಬ್ಧವಾಗಿಸಿವೆ
ನನ್ನ ಕಿವಿಯಲ್ಲಿ ವಟಗುಟ್ಟುತಿವೆ ಆ ಪುರಾಣಪಠಣಗಳು , 
ಆಲಿಸಲಾಗುತ್ತಿಲ್ಲ ಬಡದಲಿತರ ರೋದನ ,ಆವರಿಸಿದೆ ಎಲ್ಲೆಲ್ಲೂ ದೇವಸ್ಥಾನಗಳು , 
ಮರೆಯಾಗಿದ್ದಾನೆ  ಸಲಹಬೇಕಿರುವ ದೇವರು ,
ಬೇಕೆ ನಮ್ಮ ಮನುಕುಲಕೆ ಈ ಸ್ಪರ್ಧಾತ್ಮಕ ಧರ್ಮಗಳು ,
ಕಡ್ಡಾಯತನದಿಂದ ಕಟ್ಟಿಹಾಕುವ ಮೂಢವಿಚಾರಗಳು  ,
ನಿರ್ವಿಧೇಯ ಧರ್ಮಗಳು ಸದಾ ಸ್ಮರಿಸುವಂತಹವು 
ಸಂಘರ್ಷ , ಪಂಥಿಯತೆ , ಅಸಹಿಷ್ಣುತೆಯ ಕೊಡುಗೆ ಕೊಟ್ಟವು 
ವೇಗದಲ್ಲಿ ವಿವೇಕವ ಕಿತ್ತಿ , ಹಿಂಸಿಸುವ ಜಾತೀಯತೆ ಬಿತ್ತಿ
ಬರಡುಮಾಡುತ್ತಿವೆ ಬದುಕ , ಆರಿಸಲು ಪ್ರಯತ್ನಿಸುತಿವೆ ಮನೆಮನದ ಬೆಳಕ
ಬನ್ನಿ ಧಿಕ್ಕರಿಸುತ ಈ ಸರ್ವಾಧಿಕಾರದ ಸಂಸ್ಥಾನ ,
ಆಹ್ವಾನಿಸುತ ಗೌರವಿಸೋಣ ಭಾರತದ ಸಂವಿಧಾನ.

No comments:

Post a Comment