Total Pageviews

Saturday, December 20, 2014

ಬದುಕ ಬಲಾತ್ಕರಿಸದಿರಿ.
-ಡಾ.ಪ್ರೊ.ಅಭಿನಂದನ ಬಳ್ಳಾರಿ
ಸಿರಿವಂತರು ನೀವು ಜಾತಿಯಲ್ಲಿ
ಹಣ, ಬಂಗಲೆ , ಸಂತಸಗಳಲ್ಲಿ 
ನಾವು ಬಡ ಕೆಳಜಾತಿಯವರು ಜಗದ ರೀತಿಯಲ್ಲಿ
ದುಖ:ದುಮ್ಮಾನವಿಹುದು ಪ್ರತಿನಿಮಿಷದಲ್ಲಿ
ಕಾಣುವುದೆಲ್ಲ ನಿನ್ನ ತಳಮಳವು ಸೃಜನಶೀಲ
ನಮ್ಮ ಸಂಕಟ ನೋವೆಲ್ಲವು ಹಿಂಸಾತ್ಮಕ
ನೀವು ಬಸ್ಸಿನ ಗಾಜನ್ನು ಒಡೆಯಬಹುದು
ಟಿಕೆಟ್ ರಹಿತ ಪ್ರಯಾಣಿಸಲುಬಹುದು
ನಿಮ್ಮ ಜೀಬೆನು ಖಾಲಿಯಿಲ್ಲ ,
ಪ್ರಾಯೋಗಿಕ ಪ್ರತಿಭಟನೆಗೆ ಮಿತಿಯಿಲ್ಲ
ಸುಂದರ ರಸ್ತೆಗಳೆಲ್ಲವೂ ನಿಮ್ಮದು
ನಾವು ಬೆವರುಭರಿತ ಗಬ್ಬು ರೋಡ್ ರೋಲರ್ ಗಳು,
ನೀವು ಧರಿಸುವ ಬೂಟಿನ ಚರ್ಮ ನಮ್ಮದು ,
ಪಾಲಿಶ್ ಮಾಡುವ ರಕ್ತ ಕೂಡ
ನಿಮ್ಮ ಕೊಳೆಯನ್ನು ನಿರ್ಮಲಗೊಳಿಸಿದ್ದೇವೆ
ಕೊಠಡಿಯನ್ನು ತೊಳೆದು ಹೊಳೆಯುವಂತೆ ಮಾಡಿದ್ದೇವೆ ,
ನಾವು ಬರಿದಾಗಿದ್ದೇವೆ ರಿಕ್ಷಾ ಎಳೆದು , ಕೂಲಿ ಮಾಡಿ
ಹಾಲಿಲ್ಲದ ತಾಯಂತಾಗಿದ್ದೇವೆ ಹಸಿದ ಮಗುವಿಗೆ
ನಮಗೆ ಜನನವಿಲ್ಲ , ಮರಣವಿಲ್ಲ ಜನಗಣತಿಯಲ್ಲಿ
ಬಲಾತ್ಕರಿಸಬೇಡಿ ದಯಮಾಡಿ ನಾವಿದ್ದೇವೆ ಸಿರಿವಂತರು ಮಾನ-ಮರ್ಯಾದೆಯಲ್ಲಿ

No comments:

Post a Comment