Total Pageviews

Thursday, December 25, 2014

ಮನಸ್ಸಿನ ಮುದ:
-ಡಾ.ಪ್ರೊ.ಅಭಿನಂದನ ಬಳ್ಳಾರಿ

ಬಯಕೆಯು ಸದಾ ನಿನ್ನತ್ತ
ಮಾಧುರ್ಯದಿ ಸದಾ ಸೆಳೆಯುವಿ ನಿನ್ನ ರಾಗ-ತಾಳಗಳಿಂದ
ನಕ್ಷತ್ರಗಳೆ ತುಂಬಿರುವ ರಾತ್ರಿಯಲಿ ನೀ ಹಂಬಲ ಮೂಡಿಸುವೆ
ಘೋರ ಗೊಂದಲಗಳಿಲ್ಲದೆ ಮನವ ಮುದವೀಯುವೆ
ಮನದಲಿ ಆವರಿಸಿಕೊಂಡ ಕತ್ತಲೆಯನು ಮರೆಸುತ್ತ
ಚಳಿಯಿಂದ ಬೆದರಿದ ಕನಸುಗಳ ಬೆಚ್ಚಗಾಗಿಸುವೆ
ಕರ್ಣದ ಕಣಿವೆಯನು ತಂಪಾಗಿಸಿ
ಮನವ ಹಿಗ್ಗಿಸಿ ನಲಿದಾಡಿಸುವೆ
ಸರಿಗಮಗಳ ಪದಗಳಲ್ಲೆ ನೀ ಮಾತಾಡುವೆ!!!!

No comments:

Post a Comment