Total Pageviews

Thursday, November 20, 2014

ಮನಗಳ ಮಲೀನ ಮಾಡಿ ಮಂಗಳನ ಮಿಲನ ಸಂಭ್ರಮಿಸುತಿಹರತ್ತ....
-ಡಾ.ಅಭಿನಂದನ ಬಳ್ಳಾರಿ .


ಭಾರತದ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯಾದ ಇಸ್ರೋ ಇಂದು ಮಂಗಳನ ಕಕ್ಷೆ ತಲುಪುವಲ್ಲಿ ಯಶಸ್ವಿಯಾಗಿರುವುದು ಸಂತಸದ ಹಾಗೂ ಹೆಮ್ಮೆಯ ವಿಚಾರ. ಆದರೆ, ಈ ವಿಚಾರವನ್ನು ಹಿಂದುತ್ವವಾದಿ ನಕಲಿ ದೇಶಭಕ್ತರು ಹಾಗೂ ಚಕ್ರವರ್ತಿಗಳು ಮಾಧ್ಯಮದಲ್ಲಿ ಕೂತು "ಇಂದು ಈ ಸಾಧನೆಯನ್ನು ಪ್ರತಿಯೊಬ್ಬರು ಹಬ್ಬದಂತೆ ಸಿಹಿ ತಿನಿಸಿ ಆಚರಿಸೋಣ" ಎಂದಿರುವುದು ಪಾಪ ವಿಜ್ಞಾನಿಗಳ ಸ್ವಾಸ್ಥ ಕೆಡುವಂತೆ ಮಾಡಿದರು ಅಚ್ಚರಿಯಿಲ್ಲ. ಇವರಿಗೆ ಕಳೆದ ಸರ್ಕಾರದ ಬಾಹ್ಯಾಕಾಶ ಸಾದನೆಗಳನ್ನು ಹಬ್ಬದಂತೆ ಆಚರಿಸುವ ಬಯಕೆ ಏಕೆ ಬರಲಿಲ್ಲ . ದೇಶದ ಎಲ್ಲ ಸಾಧನೆಯನ್ನು ತಮ್ಮ ಸಾಧನೆ ಎಂಬಂತೆ ಬಣ್ಣಿಸುವ ಚಡ್ಡಿಗಳ ಬುದ್ಧಿ ಎಷ್ಟು ರಾಜಕೀಯ ಪ್ರೇರಿತವಲ್ಲವೆ? ಇವರೆಲ್ಲ ಎಂತಹ ಹಬ್ಬವನ್ನು ಆಚರಿಸಿದ್ದಾರೆ ಗೊತ್ತೆ , ಭಾಬ್ರಿ ಮಸೀದಿ ಕೆಡವಿ ಹಬ್ಬ , ಹುಬ್ಬಳಿಯ ಕಮರಿಪೇಟೇಯಲ್ಲಿ ಗರ್ಭಿಣಿ ಮುಸ್ಲಿಂ ಮಹಿಳೆಯ ಕೊಚ್ಚಿ ಹಬ್ಬ , ಚಿಕ್ಕಮಗಳೂರಿನಲ್ಲಿ -ಶಿವಮೊಗ್ಗದಲ್ಲಿ ಕೋಮು ಗಲಭೆಯೆಬ್ಬಿಸಿ ಸಾವಿರಾರು ಯುವಕರ ಮಾರಣ ಹೋಮದಲ್ಲಿ ಹಬ್ಬ , ಅಷ್ಟೇ ಏಕೆ ಜ್ಞಾನಪೀಠ ಸಾಹಿತಿ ಯು.ಆರ್.ಅನಂತಮೂರ್ತಿ ಸಾವಿನಲ್ಲು ಹಬ್ಬ , ಅಬ್ಬಾಬಬಬ!!!! ಕಪಟಿಗಳು ಧರ್ಮದ ಹೆಸರಿನಲ್ಲಿ ಡಂಭಾಚಾರದಿಂದ ವರ್ತಿಸಿ ಸಮಾಜದಲ್ಲಿ ಅಶಾಂತಿ ಕಾರರಗಿರುವ ಇವರಿಂದ ಬೇಕಾ ಸಿಹಿ? ಐಹಿಕ ಸುಖಕ್ಕಾಗಿ ಧರ್ಮದ ದಾರಿ ಬಳೆಸುವ ಇಂತಹ ಮಹಾನುಭಾವರು ಹಿಂದು-ಮುಸ್ಲಿಂರ ಪವಿತ್ರ ಸಂಬಂಧವನ್ನು , ಸ್ನೇಹದ ಸೇತುವೆಯನ್ನು , ವಿಶ್ವಾಸದ ಮನಗಳನ್ನೆಲ್ಲ ಮಲೀನ ಮಾಡಿ , ಮಮತೆಯಿಂದ ವರ್ತಿಸದೆ "ಮೊದಲು ಮಾನವನಾಗು" ಎಂಬ ತತ್ವ ಮರೆತು " ಮಂಗಳನ ಜೊತೆ ಮಮತೆ ಕೂಡಿತು" ಎನ್ನುತಿರುವ ಸನ್ನಿವೇಶ ಮೂಡಿಬಂದಿರುವುದು ವಿಪರ್ಯಾಸ. ಮನಸ್ಸನ್ನು ತಲುಪೋಣ ಮಂಗಳವನ್ನು ತಲುಪುವ ಮುನ್ನ . ಮನಗಳನ್ನು ಮಲೀನ ಮಾಡಿ ಮಂಗಳನ ಮಿಲನವ ಸಂಭ್ರಮಿಸುವಷ್ಟು ಅಮಾನವೀಯರಾಗದಿರೋಣ .

No comments:

Post a Comment