ಮಗುವಿನ ನಗು ನಿರಂತರವಾಗಿಸುವುದು ಹೇಗೆ?
-ಡಾ.ಅಭಿನಂದನ ಬಳ್ಳಾರಿ
ಇತ್ತಿಚಿನ ದಿನಗಳಲ್ಲಿ ನಾವೆಲ್ಲ ದಿನಪತ್ರಿಕೆಗಳಲ್ಲಿ , ಮಾಧ್ಯಮದಲ್ಲಿ ನೋಡುತ್ತಿರುವಂತೆ ಮಕ್ಕಳ ಮೇಲೆ ಅನೇಕ ಅತ್ಯಾಚಾರ ಮತ್ತು ಹಿಂಸೆ ಪ್ರಕರಣಗಳು ನಡೆದಿವೆ. ಅತ್ಯಾಚಾರಿಯ ಆಂತರಿಕ ಸ್ಥಿತಿ ಮತ್ತು ಆತನ ಹೀನ ಬುದ್ಧಿಯು ಬಗ್ಗೆ ಚಿಂತಿಸುವ -ಚರ್ಚಿಸುವ ಮೊದಲು ನಾವು ನಮ್ಮ ಜವಾಬ್ದಾರಿಯನ್ನು ಮತ್ತು ಮಕ್ಕಳ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸುವಲ್ಲಿ ನಮ್ಮ ಪಾತ್ರ ಎಷ್ಟಿದೆ ಎಂಬುದು ತಿಳಿಯುವುದು ಉತ್ತಮ. ಒಂದು ಮಗು ಶಾಲೆಯಿಂದ ಬಂದಾಕ್ಷಣ ತಾಯಿಯ ಬಳಿ ಎನೋ ಹೇಳಿಕೊಳ್ಳಲ್ಲು ಬರುತ್ತೆ " ಅಮ್ಮ ಅಮ್ಮ ಇವತ್ತು ನಮ್ಮ ಕ್ಲಾಸಲ್ಲಿ ಎನಾಯ್ತು ಗೊತ್ತಾ?"ಎನ್ನುತ್ತಾ , ಅದಕ್ಕೆ ಪೋಷಕರಾದವರು "ಎಯ್ ನೋಡು ಆ ಶೂ ಅಲ್ಲಿಡ್ತಾರಾ? , ನೀಟಾಗಿ ಆ ಮಾಡದಲ್ಲಿ ಇಡು ?" ಎಂದು ಗದರಿಸಿ ಆ ಮಗುವಿನ ಆತ್ಮವಿಶ್ವಾಸವನ್ನು ಕುಗ್ಗಿಸಿಬಿಡುತ್ತೇವೆ.ಹೀಗಾಗಿ ಎನೋ ಹೇಳಲು ಬಂದ ಪುಟ್ಟ ಕಂದ ನಮಗೆ ಆ ಕ್ಷಣಕ್ಕೆ ಹೇಳಲಾಗದೆ ನಮ್ಮೀಂದ ದೂರಾಗುತ್ತಾ ಹೋಗುತ್ತದೆ.ಇನ್ನೂ ಹಲವು ಬಾರಿ ಮಗು ತರಗತಿಯಲ್ಲಿ ನಡೆದ ತಮಾಷೆ ವಿಚಾರವೋ , ಅಥವಾ ಆ ಮಗುವಿನ ಸ್ನೇಹಿತ ಮತ್ತ್ಯಾರನ್ನೋ ಕೆಣಕಿದ ವಿಚಾರವೋ ಹೇಳಿದರೆ ನಮ್ಮ ಪ್ರತಿಕ್ರಿಯೆ ಹೀಗಿರುತ್ತದೆ" ಹೌದಾ !!! ನೀನು ಅಂಥವರ ಸಹವಾಸ ಬಿಡು , ಅವ್ನೇನು ಕೆಣಕೊದು ಎಲ್ಲರನ್ನು , ಅಪ್ಪಾ ಮುಂದೊಂದು ದಿನ ರೌಡಿ ಅಗ್ತಾನೆ ಅಂತಹವರ ಸಹವಾಸ ಒಳ್ಳೆದಲ್ಲ ಅರ್ಥ ಆಯ್ತಾ ". ಮಕ್ಕಳದ್ದು ತುಂಬಾ ಪುಟಾಣಿ ಜಗತ್ತು ಅಲ್ಲಿ ನಾವು ನೀವು ಯೋಚಿಸುವ ಹಾಗೆ ಎನು ಇರುವುದಿಲ್ಲ . ಇಡೀ ಜಗತ್ತನ್ನೆ ತಿಳಿದ ಅನೇಕ ಪೋಷಕರು ತಮ್ಮ ಸ್ವಂತ ಮಕ್ಕಳ ಪುಟ್ಟ ಜಗತ್ತು ತಿಳಿಯಲು ವಿಫಲರಾಗಿದ್ದು ಒಬ್ಬ ಪ್ರಾಂಶುಪಾಲನಾಗಿ ನಾನು ಸಾಕಷ್ಟು ಉದಾಹರಣೆ ನೋಡಿದ್ದೇನೆ. ನಮ್ಮ ತಪ್ಪೇನು ಗೊತ್ತೆ ? ಮಕ್ಕಳೂ ಕೂಡ ನಮ್ಮ ಹಾಗೆ ಡಿಸೆಂಟ್ ಆಗಿರಬೇಕೆಂದು ನಮ್ಮ ಹಾಗೆ ಡಬಲ್ ಡಿಗ್ರಿ ಗತ್ತು ತೋರಿಸುತ ಯಾರೊಡನೆಯೂ ಹೆಚ್ಚು ಬೆರೆಯಬಾರದೆಂದು ಅಲ್ಲವೆ? ಮಕ್ಕಳನ್ನು ಅರಿಯಬೇಕಾದರೆ ಇರುವ ಎಕೈಕ ಮಾರ್ಗ ಎಂದರೆ " ಆಲಿಕೆ" ಮಕ್ಕಳು ಹೇಳುವುದನ್ನ ಆಲಿಸಿರಿ . ಅವರ ಜೋತೆ ಆ ಪುಟ್ಟ ಜಗತ್ತಿನ ವಿಷಯಗಳ ಸುತ್ತ ಗಸ್ತು ಹೊಡೆಯಿರಿ , ಮಗುವಿನ ಪುಟಾಣಿ ನಗುವಿನೊಂದಿಗೆ ನೀವು ನಕ್ಕು ನೋಡಿ ....ಆಹಾ ಆ ಕಂದಮ್ಮ ನಿಮ್ಮನ್ನು ಪ್ರೀತಿಯಿಂದ ಅಮ್ಮ -ಅಪ್ಪ ಎಂದು ಮುದ್ದಿಸದೆ ಹೊದೀತೆ? ಮಕ್ಕಳನ್ನು ನಾವು ಮತ್ತೊಂದು ಮಗುವಿನೊಂದಿಗೆ ಹೋಲಿಸುವುದಾಗಲೀ , ನಿಂದಿಸುವುದಾಗಲೀ ಸಲ್ಲ. ಮಕ್ಕಳ ಜಗತ್ತಿನಲ್ಲಿ ಎಲ್ಲವೂ ಹೊಸದು ಭಾಗಾಕಾರ , ಗುಣಾಕಾರ ಎಲ್ಲವೂ . ಸಮಯ ಕೊಡಿ -ಸಂವಹನ ಕೊಡಿ , ಷರತ್ತುಗಳನ್ನು ವಿಧಿಸಬೇಡಿ. ನಾವು ಅನೇಕ ಸಲ ಮಗು ಸೈಕಲ್ ಕೇಳಿದರೆ ಹೇಳುತ್ತೇವೆ " ಮಗು ಈ ಸಲ ನೀನಿ ಗಣಿತದಲ್ಲಿ ೮೦% ಮಾಡು ಕೊಡಿಸ್ತೇನೆ " ಎಂದು ! ಸೈಕಲ್ ಗೂ ಅಂಕಕ್ಕೂ ಎನೀದೆ ಸಂಬಂಧ? ಮಗುವಿಗೆ ಈ ತರಹದ ಷರತ್ತು ವಿಧಿಸುವುದರ ಬದಲು " ಮಗು ಸೈಕಲ್ ಒಡಿಸುವುದು ಈ ಪೇಟೆಯಲ್ಲಿ ನಿನ್ನ ಸುರಕ್ಷತೆ ದೃಷ್ಟಿಯಿಂದ ಹಿತವಲ್ಲ "ಎಂದು ಹೇಳಿ ರಮಿಸಿ , ಮಗು ಒಪ್ಪುತ್ತದೆ. ನಾವು ಮಗುವಿನ ಹತ್ತಿರ ನಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸುವುದರಲ್ಲಿ ಮೊದಲಿಗರು.ಮಕ್ಕಳಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸಿ , ಮಕ್ಕಳ ಸಾಧನೆಯನ್ನು ಮುಕ್ತವಾಗಿ ಪ್ರಶಂಸಿಸಿ . ಮಗುವಿನ ಭಾವನೆಗೆ ನಾವು ಪ್ರತಿಭಾವನೆ ಸೆರಿಸಿ ಅವರ ಬೆಳವಣಿಗೆಗೆ ಸಹಾಯಕರಾಗುವತ್ತ ಗಮನಹರಿಸಬೇಕು . ಮಕ್ಕಳ ಮನಸ್ಸಿನಲ್ಲಿ ಪೊಷಕರ ಪ್ರೀತಿ ಬಗ್ಗೆ ದ್ವಂದ್ವ ಉಂಟಾದರೆ ಅದೂ ಅತ್ಯಾಚರಕ್ಕೆ ಬಲಿಬೀಸುತ್ತಿರುವವರಿಗೆ ಅನುಕೂಲವಾಗುತ್ತದೆ.ಮಕ್ಕಳಲ್ಲಿ ಅತ್ಮಾಭಿಮಾನ ಬೆಳೆಸಿ , ಅತ್ಯಾಚಾರ ತಡೆಗಟ್ಟಿ. ನಮ್ಮ ಮಕ್ಕಳನ್ನು ನಾವು ನೋಡಿಕೊಳ್ಳದೆ ಹೋದರೆ , ಬೇರೆಯವರು ನೋಡಿಕೊಳ್ಳುತ್ತಾರೆ ಹುಷಾರ್!!!
No comments:
Post a Comment